ಯು ಕೆ ಇಬ್ರಾಹಿಂ ಹಾಜಿ ಉಳ್ಳಾಲ
ಯು ಕೆ ಇಬ್ರಾಹಿಂ ಹಾಜಿ ಉಳ್ಳಾಲ ✍️ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ. ಉಳ್ಳಾಲದ ಯು ಕೆ ಇಬ್ರಾಹಿಂ ಹಾಜಿಯವರನ್ನು ತಿಳಿಯದವರು ವಿರಳ. ಸುದೀರ್ಘ 35 ವರ್ಷಗಳ ಕಾಲ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1929 ರಲ್ಲಿ ಶೇಕಾಕ ಮತ್ತು ಪುತ್ತುಮ್ಮ (ನಫೀಸ) ದಂಪತಿಗಳ ಸುಪುತ್ರನಾಗಿ ಉಳ್ಳಾಲದ ಕೋಟೆಪುರದಲ್ಲಿ ಜನಿಸಿದರು. ತೀರಾ ಬಡ ಕುಟುಂಬವಾಗಿತ್ತು ಅವರದು. ಗೋಣಿ ಚೀಲ ವ್ಯವಹಾರದ ಮೂಲಕ ತಮ್ಮ ವ್ರತ್ತಿ ಜೀವನವನ್ನು ಆರಂಭಿಸಿದ ಯುಕೆ ಇಬ್ರಾಹಿಂ ಹಾಜಿಯವರು ಬಡವರ ಶಿಕ್ಷಣದ ಉನ್ನತಿಗಾಗಿ ಒತ್ತುಕೊಟ್ಟರು. ಉಳ್ಳಾಲದ ಬಡ ಜನರು ಶಿಕ್ಷಣದಿಂದ ವಂಚಿತರಾಗಬಾರದು. ಇತರ ಪ್ರದೇಶದ ವಿದ್ಯಾವಂತರೆದುರು ತಮ್ಮೂರಿನ ಜನರು ಕೀಳಾಗಬಾರದು ಎಂಬ ದೂರದ್ರಷ್ಟಿ ಅವರಲ್ಲಿತ್ತು. ವಿಶಾಲ ಮನಸ್ಸಿನ ವ್ಯಕ್ತಿತ್ವದ ಒಡೆಯರಾಗಿದ್ದರು. ಅವರ ಮಾತಿನಲ್ಲಿ ತಂತ್ರಗಾರಿಕೆ, ನಡವಳಿಕೆಯಲ್ಲಿ ಗಾಂಭೀರ್ಯತೆ ಇತ್ತು. ಅವರು ಎಲ್ಲಾ ಜಾತಿ, ಧರ್ಮಗಳ ಜನತೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರ ಸ್ನೇಹ ತುಂಬಿದ ಸ್ವಭಾವದಿಂದಲೇ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಸಾಮುದಾಯಿಕ ಮತ್ತು ಸಾಮಾಜಿಕ ಸೇವೆಯ ಮೂಲಕ ಜನಮನ್ನಣೆ ಪಡೆದ ಪ್ರಾರಂಭ ಹಂತದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದರು. ಬಳಿಕ ಸಯ್ಯಿದ್ ಮದನಿ ಉಳ್ಳಾಲ ಜಮಾತಿನ ಸಮಿತಿ ಸದಸ್ಯರಾದರು. 1973 ರಲ್ಲಿ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಇದರ ಅ...